ಪಬ್ಲಿಕ್ ಪ್ರೊಡಕ್ಷನ್ಸ್ ಐಎನ್ಸಿ ಲಾಂಛನದಲ್ಲಿ ಕಥೆ, ಚಿತ್ರಕಥೆ, ನಿರ್ಮಾಣ ಮಾಡಿ ನಿರ್ದೇಶಿಸುತ್ತಿರುವ ಹೆಚ್.ಪಿ. ಇವರು ಆದರ್ಶ ಫಿಲಮ ಇನ್ಸ್ಟಿಟ್ಯೂಟ್ನಲ್ಲಿ ನಿರ್ದೆಶನದ ವಿಭಾಗದಲ್ಲಿ ಕಲಿತು, ಇತರ ನಿರ್ದೇಶಕರುಗಳ ಜೊತೆ ೬ ವರ್ಷಗಳಿಂದ ಕೆಲಸ ಮಾಡಿದ್ದಾರೆ. ಇವರು ಮೊದಲಿಗೆ ಕೊಡುಗೈ ಒಡೆಯ ಎಂಬ ಭಕ್ತಿ ಗೀತೆಯನ್ನು ಶಿವನ ಬಗ್ಗೆ ಬರೆದಿರುವ ಭಕ್ತಿಗೀತೆ ಧ್ವನಿಸುರುಳಿ ಬಿಡುಗಡೆಯಾಗಿದೆ ಅಲ್ಲದೆ ನೋವಿನ ಬಾಳಿಗೆ ದೈರ್ಯವೇ ಗೆಳತಿ ಕಥಾ ಸಂಕಲನ ಕೂಡ ಹೊರತಂದಿದ್ದಾರೆ. ಈ ಚಿತ್ರದ ಚಿತ್ರೀಕರಣ ಬೆಂಗಳೂರು-ಮೈಸೂರು, ಶ್ರೀರಂಗ ಪಟ್ಟಣ, ನಡೆಯುವುದಾಗಿ ಹೇಳಿದ್ದಾರೆ. ಪ್ರಯೋಗಾತ್ಮಕ ಹಾಗೂ ಸಂಪೂರ್ಣ ಮನರಂಜನೆಯ ಚಿತ್ರವಾಗಿದ್ದು ಇದರಲ್ಲಿ ಪುನೀತ್, ಸೋಮ, ಅನಾಮ್ ಪ್ರಮುಖ ಪಾತ್ರಧಾರಿಗಳಾಗಿದ್ದು, ಚಿತ್ರಕ್ಕೆ ಸಂಗೀತ- ರಾಜ್ ಕಿಶೋರ್, ಸಾಹಿತ್ಯ - ಸಂಜಯ್, ಎಂಬಿಎ ಚಿತ್ರಕ್ಕೆ ಸೂಕ್ತ ಅರ್ಥ ಬರುವ ಶೀರ್ಷಿಕೆ ಕೊಟ್ಟವರಿಗೆ ಆಡಿಯೋ ಬಿಡುಗಡೆ ದಿನ ಬಹುಮಾನ ನೀಡುವುದಾಗಿ ನಿರ್ದೇಶಕರು ತಿಳಿಸಿದ್ದಾರೆ.